Tuesday, April 11, 2017

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ lyrics

ಚಿತ್ರ: ದೃವತಾರೆ
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಚಿ.ಉದಯ್ ಶಂಕರ್
ನಿರ್ದೇಶನ:ಎಂ.ಎಸ್ ರಾಜಶೇಕರ್

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲಾ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.

ಮಾಮರ ತೂಗುತ,ಚಾಮರ ಹಾಸುತ,ಪರಿಮಳ ಎಲ್ಲೇಡೇ ಚಲ್ಲುತಿರೆ.
ಗಗನದ ಅಂಚಲಿ ರಂಗನು ಚೆಲ್ಲುತಾ,ಸಂದ್ಯೇಯು ನಾಟ್ಯವಾ ಹಾಡುತಿರೆ.
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯು ನಲಿಯುತಿರೆ ,
ಲ ಲ ಲ ಲಾ ......ಲ ಲ ಲ ಲ ಲಾ

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.

ಪ್ರೇಮದ ಭಾವಕೆ,ಪ್ರೀತಿಯಾ ರಾಗಕೆ,ಮೌನವೇ ಗೀತೆಯಾ ಹಾಡುತಿರೆ,
ಸರಸದ ಸ್ನೇಹಕೆ.ಒಲವಿನ ಕಾಣಿಕೆ,ನೀಡಲು ಅಧರವು ಅರಳುತಿರೆ,
ಎಂದಿಗೂ ಹೀಗೆ ಬಾಳುವಾಸೆ ತುಂಬಿ ಬಂದು
ಪ್ರೇಮಿಗಳು ನಲಿಯುತಿರೆ,ಪ್ರೇಮಿಗಳು ನಲಿಯುತಿರೆ

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ lyrics

ಗಿರಿಕನ್ಯೆ : ಥೈ ಥೈ ಥೈ ಥೈ ಬಂಗಾರಿ
ಚಿತ್ರ: ಗಿರಿಕನ್ಯೆ
ಸಂಗೀತ:ರಾಜನ್ ನಾಗೇಂದ್ರ
ಸಾಹಿತ್ಯ:ಚಿ.ಉದಯ್ ಶಂಕರ್
ನಿರ್ದೇಶನ:ದೊರೈ ಭಗವಾನ್
ಗಾಯಕರು: ಡಾ.ರಾಜಕುಮಾರ್

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ

ಥೈ ಥೈ ಥೈ ಥೈ ಬಂಗಾರಿ,ಸೈ ಸೈ ಸೈ ಎನ್ನು ಸಿಂಗಾರಿ,ಆಹಾಹಹಾ
ಥೈ ಥೈ ಥೈ ಥೈ ಬಂಗಾರಿ ಓಹೋ .......

ಕಾನನದಾ ದೇವತೆಯಂತೆ ಬಂದಿರುವೆ ಎದುರಲ್ಲಿ,
ಜೇನಾಗಿ ನೀ ತುಂಬಿರುವೆ ನನ್ನೆದೆಯಾ ಹೂವಲ್ಲಿ,
ಮೀನಾಗಿ ಹಾಡುತಲಿರುವೆ ಮನಸೆಂಬ ಮಡುವಲ್ಲಿ,
ಮಿಂಚಾಗಿ ಹರಿದಾಡಿರುವೆ ಈ ನನ್ನಾ ಮೈಯಲ್ಲಿ,ಈ ನನ್ನಾ ಮೈಯಲ್ಲಿ,

ಆಹಾ ! ಥೈ ಥೈ ಥೈ ಥೈ ಬಂಗಾರಿ,ಸೈ ಸೈ ಸೈ ಎನ್ನು ಸಿಂಗಾರಿ,ಅಲೆಲೆಲೇ
ಥೈ ಥೈ ಥೈ ಥೈ ಬಂಗಾರಿ

ಹಾರಾಡೋ ಹಕ್ಕಿಗಳಲ್ಲಿ,ಅರಗಿಳಿಯೇ ಅಂದವು,
ನಾ ಕಂಡ ಹೆಣ್ಣುಗಳಲ್ಲಿ,ಚೆಲುವೆ ನೀ ಚಂದವು,
ಆ ಆ ಆ ಆ  ಆಹ ಆಹ ಆಹ ಓ ಹೋಯ್
ಮುಳ್ಳೆಲ್ಲ ಹೂವಿನ ಹಾಗೆ,ನಿನ್ನೊಡನೆ ಬರುವಾಗ,
ಉರಿ ಬಿಸಿಲು ಹುಣ್ಣಿಮೆಯಂತೆ ಹೆಣ್ಣೇ ನೀ ನಗುವಾಗ,ಹೆಣ್ಣೇ ನೀ ನಗುವಾಗ,

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ

ಜಿಗಿದಾಡೋ ಜಿಂಕೆಗಳಂತೆ ಕಾಡೆಲ್ಲಾ ಓಡುವಾ,
ನಲಿದಾಡೋ ಚಿಟ್ಟೆಗಳಂತೆ ವನವೆಲ್ಲಾ ನೋಡುವಾ,
ಹರಿದಾಡೋ ನದಿಯಂತಾಗಿ ಗಿರಿಯಿಂದಾ ಜಾರುವಾ,
ಕಡಲನ್ನು ಕೂಡುವ ಹಾಗೆ ಒಂದಾಗಿ ಸೇರುವಾ,ಒಂದಾಗಿ ಸೇರುವಾ

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ

ಆಕಾಶದಿಂದ ಧರೆಗಿಳಿದ ರಂಭೆ lyrics

ಚಿತ್ರ: ಚಂದನದ ಗೂಂಬೆ
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ದೂರೈ-ಭಗವಾನ್
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ 

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,

ಬಂಗಾರದಿಂದ  ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ,
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ,
ಆ ದೇವರೇ ಕಾಣಿಕೆ ನೀಡಿದಾ,ನನ್ನಾ ಜೊತೆ ಮಾಡಿದ...ಆಹಾ........ 

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,

ನಡೆವಾಗ ನಿನ್ನಾ,ಮೈ ಮಾಟವೇನು,
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು,
ಆ ಹೂನಗೆ ಕಂಡೆನು,ಸೋತೆನು,ನಿನ್ನಾ ಸೆರೆಯಾದೆನು...ಆಹಾ........

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,....ಚಂದನದ ಗೂಂಬೆ,...ಚಂದನದ ಗೂಂಬೆ,.....ಚಂದನದ ಗೂಂಬೆ,

Wednesday, February 1, 2017

ಹೃದಯದಲ್ಲಿ ಆಸೆ ಮೂಡಿ ಮನದಿ ಮಾತು ನಿಂತಿದೆ Lyrics

ಚಿತ್ರ: ದೇವರೇ ದಿಕ್ಕು (೧೯೭೭/1977)
ಸಾಹಿತ್ಯ: ಬಸವರಾಜ್ ಕೆಸ್ತೂರ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್.ಪಿ.ಬಿ, ವಾಣಿ ಜಯರಾಮ್

ಹೃದಯದಲ್ಲಿ ಆಸೆ ಮೂಡಿ
ಮನದಿ ಮಾತು ನಿಂತಿದೆ
ನಾಚಿ ನಾಚಿ ನಾಚಿ ತಾನು
ಮನಸಿನಿಂದ ಬಾರದೆ ಬಾರದೆ
ಹೃದಯದಲ್ಲಿ ಆಸೆ ಮೂಡಿ
ಮನದಿ ಮಾತು ನಿಂತಿದೆ
ನಾಚಿ ನಾಚಿ ನಾಚಿ ತಾನು
ಮನಸಿನಿಂದ ಬಾರದೆ ಬಾರದೆ

ಏಕೋ ಏನೋ ಸೋತು ಹೋದೆ
ನಿನ್ನ ಕಣ್ಣ ನೋಟಕೆ
ಏಕೋ ಏನೋ ಸೋತು ಹೋದೆ
ನಿನ್ನ ಕಣ್ಣ ನೋಟಕೆ
ಓಡಿ ಓಡಿ ಓಡಿ ಬಂದೆ
ನಿನ್ನ ಪ್ರೇಮದಾಟಕೆ
ಕವಿಯು ಬರೆದ ಕವನವಾದೆ
ನಿನ್ನ ಪ್ರೇಮ ರಾಗಕೆ

ಹೃದಯದಲ್ಲಿ ಆಸೆ ಮೂಡಿ
ಮನದಿ ಮಾತು ನಿಂತಿದೆ
ನಾಚಿ ನಾಚಿ ನಾಚಿ ತಾನು
ಮನಸಿನಿಂದ ಬಾರದೆ ಬಾರದೆ

ತನು ಮನ ನಿನ್ನದಾಯ್ತು
ನಿನ್ನ ನಾನು ಸೇರಲೆ
ತನು ಮನ ನಿನ್ನದಾಯ್ತು
ನಿನ್ನ ನಾನು ಸೇರಲೆ
ಹಾಡಿ ಹಾಡಿ ಹಾಡಿ ನಾನು
ಹುಚ್ಚನಾಗಿ ಕುಣಿಯಲೆ
ವಿಧಿಯ ಕುಸುಮವಾಗಿ ಬಂದು
ನಿನ್ನ ಪೂಜೆ ಗೈಯಲೆ

ಹೃದಯದಲ್ಲಿ ಆಸೆ ಮೂಡಿ
ಮನದಿ ಮಾತು ನಿಂತಿದೆ
ನಾಚಿ ನಾಚಿ ನಾಚಿ ತಾನು
ಮನಸಿನಿಂದ ಬಾರದೆ ಬಾರದೆ

Monday, January 30, 2017

ಕಂಬದ ಮ್ಯಾಲಿನ ಗೊಂಬಿಯೇ ನಂಬಲೇನ ನಿನ್ನ Lyrics

ಕಂಬದ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನ
ಭಿತ್ತಿಯ ಮ್ಯಾಲಿನ ಚಿತ್ತಾರವೇ
ಚಿತ್ತಗೊಟ್ಟ ಹೇಳು ಉತ್ತರವಾ [೨]

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನ
ಹಬ್ಬವಾಗುವುದೇನ

ಕಂಬದ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನ
ಭಿತ್ತಿಯ ಮ್ಯಾಲಿನ ಚಿತ್ತಾರವೇ
ಚಿತ್ತಗೊಟ್ಟ ಹೇಳು ಉತ್ತರವಾ
ನೀರೊಲೆಯ ನಿಗಿಕೆಂಡ ಸತ್ಯವೇ ಈ
ಅಭ್ಯಂಜನವಿನ್ನು ನಿತ್ಯವೇ
ಒಳ್ಳೆ ಗಮಗುಡತೀಯಲ್ಲೆ ಸೀಗೆಯೆ ನಿನ್ನ
ವಾಸನಿ ಹರಡಿರಲಿ ಹೀಗೆಯೆ

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನ
ಹಬ್ಬವಾಗುವುದೇನ ||೧||

ಒಪ್ಪಿಸುವೆ ಹೂ ಹಣ್ಣು ಭಗವಂತ ನೆಪ್ಪೀಲೆ
ಹರಸೆನಗಿ ಇರಲೆಂತ
ಕಪ್ಪೂರವಾ ಬೆಳಗೂವೆ ದೇವನೇ ತಪ್ಪುಗೆ
ವರಲೆನ್ನ ಗುಣವಂತ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನ
ಹಬ್ಬವಾಗುವುದೇನ ||೨||

ಚಿತ್ರ : ನಾಗಮಂಡಲ
ಗೀತೆ : ಶ್ರೀ ಗೋಪಾಲ ವಾಜಪೇಯಿ
ಸಂಗೀತ : ಶ್ರೀ ಸಿ.ಅಶ್ವತ್ಥ್
ಗಾಯಕಿ : ಶ್ರೀಮತಿ ಸಂಗೀತಾ ಕಟ್ಟಿ
ಕುಲಕರ್ಣಿ

Monday, January 23, 2017

ಹೊಸ ಬಾಳು ನಿನ್ನಿಂದ, ನೀ ತಂದೆ ಆನಂದ Lyrics

ಹೊಸ ಬಾಳು  ನಿನ್ನಿಂದ
ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹೊ, ನಿನ್ನ ನಾ ಸೇರಲು
ತನುವೂ ಹೂವಾಯ್ತು, ಮನವೂ ಜೇನಾಯ್ತು
ತನುವೂ ಹೂವಾಯ್ತು, ಮನವೂ ಜೇನಾಯ್ತು

ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹಾ, ನಿನ್ನ ನಾ ಸೇರಲು

ನಿನ್ನ ನಾ ಮೆಚ್ಚಿ, ನನ್ನ ನೀ ಮೆಚ್ಚಿ
ಪ್ರೀತಿಯಿಂದ ಮನಸು ಬಿಚ್ಚಿ ಮಾತನಾಡಿ
ನೀನೇ ನನ ಜೋಡಿ, ಎಂದು ಕೈ ನೀಡಿ ಸಂಗಾತಿ ಆದೆನು
ನಿನ್ನ ಸ್ನೇಹಕ್ಕೆ, ನಿನ್ನ ಪ್ರೇಮಕ್ಕೆ ಎಂದೊ ಸೋತುಹೋದೆ ಮುದ್ದುನಲ್ಲ
ನಿನ್ನ ಮಾತಲ್ಲಿ, ಕಣ್ಣ ಮಿಂಚಲ್ಲಿ ನೀರಾಗಿ ಹೋದೆನು, ನೀರಾಗಿ ಹೋದೆನು

ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹಾ, ನಿನ್ನ ನಾ ಸೇರಲು

ಲಾಲಾ ಲಲ ಲಾಲಾ,
ಲಾಲಾ ಲಾಲಾಲ,
ಲಾಲಾ ಲಾಲಾಲ, ಲಾಲ್ಲಾ

ಮಾತ ಒಂದಾಗಿ, ಆಸೆ ಒಂದಾಗಿ, ನಿನ್ನ ನನ್ನ ಮನಸು ಬೆರೆತು ಹೋಗಿ
ಬಯಕೆ ಹೂವಾಗಿ, ಪ್ರೀತಿ ಹಣ್ಣಾಗಿ, ಒಂದಾಗಿ ಹೋದೆವು

ಮಾತು ಬಂಗಾರ, ಗುಣವು ಬಂಗಾರ
ನನ್ನ ರಾಜ ನನ್ನ ಬಾಳ ಬಂಗಾರ
ನೀನು ನನ್ನಂತೆ, ನಾನು ನಿನ್ನಂತೆ, ನೀ ನನ್ನ ಜೀವವು, ನೀ ನನ್ನ ಜೀವವು

ಹೊಸ ಬಾಳು  ನಿನ್ನಿಂದ
ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹೊ, ನಿನ್ನ ನಾ ಸೇರಲು
ತನುವೂ ಹೂವಾಯ್ತು, ಮನವೂ ಜೇನಾಯ್ತು
ತನುವೂ ಹೂವಾಯ್ತು, ಮನವೂ ಜೇನಾಯ್ತು

ಹೊಸ ಬಾಳು  ನಿನ್ನಿಂದ, ನೀ ತಂದೆ ಆನಂದ
ನಿನ್ನ ನಾ ನೋಡಲು, ಹೊ, ನಿನ್ನ ನಾ ಸೇರಲು
ಲಲ್ಲಾ ಲಾಲಲ್ಲಾ

Saturday, January 21, 2017

ನಗುವುದನು ಕಲಿತವನೆ ಬಾಳುವುದ ಅರಿತವನು Lyrics

ಚಿತ್ರ: ಪೆದ್ದ ಗೆದ್ದ (೧೯೮೨/1982)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಕೆ.ವಿ.ಮಹದೇವನ್
ಹಾಡಿದವರು: ಎಸ್.ಪಿ.ಬಿ.

ನಗುವುದನು ಕಲಿತವನೆ
ಬಾಳುವುದ ಅರಿತವನು
ಎಲ್ಲರ ಮನವ ಸೆಳೆಯುವ ಹಾಗೆ
ನೋಡುವ ಆಸೆಯು ಮೂಡುವ ಹಾಗೆ
ನಗುವುದನು ಕಲಿತವನೆ
ಬಾಳುವುದ ಅರಿತವನು

ಬಾಲ್ಯವು ಒಂದು ದಿನ
ನಿದ್ರೆಗೆ ಒಂದು ದಿನ
ಮುದಿತನ ಒಂದು ದಿನ
ಬದುಕೇ ಮೂರು ದಿನ
ಬಾಲ್ಯವು ಒಂದು ದಿನ
ನಿದ್ರೆಗೆ ಒಂದು ದಿನ
ಮುದಿತನ ಒಂದು ದಿನ
ಬದುಕೇ ಮೂರು ದಿನ
ಈ ಮೂರೇ ದಿನದ ಜೀವನದಲ್ಲಿ
ನಗಿಸುತ ಎಲ್ಲರ ಹಾಯಾಗಿ

ನಗುವುದನು ಕಲಿತವನೆ
ಬಾಳುವುದ ಅರಿತವನು

ಪ್ರಾಣಿ ಪಕ್ಷಿಗಳು
ನಗುವುದು ಅರಿತಿಲ್ಲ
ಮಾನವನೋರ್ವನೆ
ನಗುವುದನು ಬಲ್ಲ
ಪ್ರಾಣಿ ಪಕ್ಷಿಗಳು
ನಗುವುದು ಅರಿತಿಲ್ಲ
ಮಾನವನೋರ್ವನೆ
ನಗುವುದನು ಬಲ್ಲ
ನಗುವುದೆ ಜನನ
ಅಳುವುದೆ ಮರಣ
ನಗುವುದೆ ಸುಖಕೆ ಸಾಧನ

ನಗುವುದನು ಕಲಿತವನೆ
ಬಾಳುವುದ ಅರಿತವನು
ಎಲ್ಲರ ಮನವ ಸೆಳೆಯುವ ಹಾಗೆ
ನೋಡುವ ಆಸೆಯು ಮೂಡುವ ಹಾಗೆ
ನಗುವುದನು ಕಲಿತವನೆ
ಬಾಳುವುದ ಅರಿತವನು

ಸಂಕೋಚವ ಬಿಡು, ಗೆಳತಿಯೆ Lyrics

ಚಿತ್ರ: ಸಮಯದ ಗೊಂಬೆ (೧೯೮೪/1984)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗ ರಾವ್
ಹಾಡಿದವರು: ಡಾ.ರಾಜ್‌ಕುಮಾರ್, ಎಸ್.ಜಾನಕಿ

ಸಂಕೋಚವ ಬಿಡು, ಗೆಳತಿಯೆ
ನಿನ್ನಾಸೆಗಳೆಲ್ಲವನು, ಹೇಳು ನೀ ನನಗೆ
ಈಗಲೇ ಎಲ್ಲವ, ನನ್ನಾಣೆ ಪೂರೈಸುವೆ
ಹೆಣ್ಣಲ್ಲವೆ ನಾನು, ಗೆಳೆಯನೆ
ನೂರಾಸೆಯು ಇರದೇನು, ಹೇಳು ನೀ ನನಗೆ
ಮದುವೆಯ ಬಯಕೆಯು, ನನ್ನಲ್ಲಿ ಬರದೇನು

ಕಣ್ಣಲಿ ಹೀಗೇತಕೆ, ತೀರದ ಬಾಯಾರಿಕೆ
ಕೆನ್ನೆಯು ಕೆಂಪೇತಕೆ, ಚೆಂದುಟಿ ಮಿಂಚೇತಕೆ
ಹೇಳೆಯಾ ಹೆಣ್ಣೇ
ನನ್ನಾ ಕಣ್ತುಂಬ ತುಂಬಿ ಈ ರೂಪ
ಏನೋ ಆನಂದವು
ನನ್ನಾ ಕಣ್ತುಂಬ ತುಂಬಿ ಈ ರೂಪ
ಏನೋ ಆನಂದವು
ಎದೆಯನು ತುಂಬಲು, ಮೈಯೆಲ್ಲ ಹೂವಾಗಿದೆ

ಹೆಣ್ಣಲ್ಲವೆ ನಾನು, ಗೆಳೆಯನೆ
ನೂರಾಸೆಯು ಇರದೇನು, ಹೇಳು ನೀ ನನಗೆ
ಮದುವೆಯ ಬಯಕೆಯು, ನನ್ನಲ್ಲಿ ಬರದೇನು

ಸಂಜೆಯ ಈ ರಂಗಿಗೆ, ಹಕ್ಕಿಯ ಹಾರಾಟಕೆ
ತಣ್ಣನೆ ತಂಗಾಳಿಗೆ, ಹೂಗಳ ಈ ಕಂಪಿಗೆ
ಸೋತೆನು ನಾನು
ನಿನ್ನಾ ಈ ಸ್ನೇಹ ನಿನ್ನಾ ಈ ಮೋಹ
ತಂದಾ ಸಂತೋಷವು
ನಿನ್ನಾ ಈ ಸ್ನೇಹ ನಿನ್ನಾ ಈ ಮೋಹ
ತಂದಾ ಸಂತೋಷವು
ಜೊತೆಯಲೇ ಇರುವೆನು
ಒಂದಾಗಿ ಎಂದೆಂದಿಗೂ

ಸಂಕೋಚವ ಬಿಡು, ಗೆಳತಿಯೆ
ನಿನ್ನಾಸೆಗಳೆಲ್ಲವನು, ಹೇಳು ನೀ ನನಗೆ
ಈಗಲೇ ಎಲ್ಲವ, ನನ್ನಾಣೆ ಪೂರೈಸುವೆ
ಹೆಣ್ಣಲ್ಲವೆ ನಾನು, ಗೆಳೆಯನೆ
ನೂರಾಸೆಯು ಇರದೇನು, ಹೇಳು ನೀ ನನಗೆ
ಮದುವೆಯ ಬಯಕೆಯು, ನನ್ನಲ್ಲಿ ಬರದೇನು

Tuesday, January 17, 2017

ಓಂ..ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ Lyrics

ಓಂ.....ಓಂ......
ಓಂ..ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ
ಓಂ..ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದವೊಂ ಓಂ.....

ನಗುವ ಮನಸೆ ಸಾಕು ನಮಗೆ ಹಗಲುಗನಸೆ ಬೇಡ
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ
ತಂದೆ ತಾಯೆ ದೈವ ಗುರುವೇ ನಮ್ಮ ಜೀವ
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು......
ಹೇ ದಿನಕರ......

ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು
ದಯೆ ತೋರೋ ಧರಣಿಯಂತ ಮನೋಧರ್ಮ ನೀಡು
ನೊಂದ ಎಲ್ಲ ಜೀವ ನನ್ನದೆಂಬ ಭಾವ
ಬಾಳಿನಲ್ಲಿ ತುಂಬೋ ವಿದ್ಯೆ ವಿನಯ ಕರುಣಿಸೋ
ಆ.........
ಹೇ ದಿನಕರ......

ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ Lyrics

ಚಿತ್ರ: ಹೃದಯ ಹಾಡಿತು (೧೯೯೧/1991)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಾಡಿದವರು: ಎಸ್.ಪಿ.ಬಿ.

ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ

ಹರಸುವೆನು ಪ್ರೀತಿಯಲಿಂದು
ಸುಖವಾಗಿ ಬಾಳು
ಹರಸುವೆನು ಪ್ರೀತಿಯಲಿಂದು
ಸುಖವಾಗಿ ಬಾಳು
ಬದುಕಿನಲಿ ಸಂತಸ ತರುವ
ಸವಿಮಾತೆ ಕೇಳು
ಕನಸಲ್ಲು ನೋಯದ ಹಾಗೆ
ಎಂದೆಂದು ಬಾಡದ ಹಾಗೆ
ನಗುತಲಿರು ನನ್ನ ಮಲ್ಲಿಗೆ

ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ

ನಯನಗಳು ಹೀಗೆಯೆ ಎಂದೂ
ಹೊಸ ನೋಟ ನೋಡಿ
ನಯನಗಳು ಹೀಗೆಯೆ ಎಂದೂ
ಹೊಸ ನೋಟ ನೋಡಿ
ಮನಸಿನಲಿ ಸಂಭ್ರಮ ತುಂಬಿ
ಹೊಸ ಗೀತೆ ಹಾಡಿ
ಧ್ರುವತಾರೆ ಮಿನುಗುವ ಹಾಗೆ
ನೀ ಬಾಳ ಬಾನಲಿ ಹೀಗೆ
ನಗುತಲಿರು ನನ್ನ ಮಲ್ಲಿಗೆ

ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ

ಜೀವನವೇ ಸುಖ ಪಯಣ Lyrics

ಚಿತ್ರ: ಮರೆಯದ ದೀಪಾವಳಿ (೧೯೭೨/1972)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಜೀವನವೇ ಸುಖ ಪಯಣ
ಒಲವಿನಾ ಕವನ, ಒಲವಿನಾ ಕವನ
ಕನಸಿನಲ್ಲು ನೆನಸಲಿಲ್ಲ
ಇಂತ ಒಂದು ದಿನ, ಇಂತ ಒಂದು ದಿನ

ಜೀವನವೇ ಸುಖ ಪಯಣ
ಒಲವಿನಾ ಕವನ, ಒಲವಿನಾ ಕವನ
ಕನಸಿನಲ್ಲು ನೆನಸಲಿಲ್ಲ
ಇಂತ ಒಂದು ದಿನ, ಇಂತ ಒಂದು ದಿನ

ಒಮ್ಮೆ ಕಂಡ ಚಣ ಕದ್ದು ನನ್ನ ಮನ
ನಗುತ ನಿಂದವಳು ನೀನೇ
ಒಂದು ನೋಟದಲಿ ಒಂದು ಮಾತಿನಲಿ
ನನ್ನ ಗೆದ್ದವರು ನೀವೇ
ಒಮ್ಮೆ ಕಂಡ ಚಣ ಕದ್ದು ನನ್ನ ಮನ
ನಗುತ ನಿಂದವಳು ನೀನೇ
ಒಂದು ನೋಟದಲಿ ಒಂದು ಮಾತಿನಲಿ
ನನ್ನ ಗೆದ್ದವರು ನೀವೇ
ಇದೊ ಇದೆ ಸೊಗದ ಹೊನಲು
ಸದಾ ಸುಖಿ ನೀ ಬಳಿ ಇರಲು

ಜೀವನವೇ ಸುಖ ಪಯಣ
ಒಲವಿನಾ ಕವನ, ಒಲವಿನಾ ಕವನ

ಉಸಿರಲುಸಿರಾಗಿ ನಿಮ್ಮ ನೆರಳಾಗಿ
ನಡೆವ ಸಹಚಾರಿ ನಾನು
ಮನೆಯ ಬೆಳಕಾಗಿ ಜೀವ ಶೃತಿಯಾಗಿ
ಇರುವ ಸಿರಿದೇವಿ ನೀನು
ಉಸಿರಲುಸಿರಾಗಿ ನಿಮ್ಮ ನೆರಳಾಗಿ
ನಡೆವ ಸಹಚಾರಿ ನಾನು
ಮನೆಯ ಬೆಳಕಾಗಿ ಜೀವ ಶೃತಿಯಾಗಿ
ಇರುವ ಸಿರಿದೇವಿ ನೀನು
ತನು ಮನ ತರುವೆ ನಿನಗೆ
ಅದೆ ಮನ ಬಯಸೊ ಕೊಡುಗೆ

ಜೀವನವೇ ಸುಖ ಪಯಣ
ಒಲವಿನಾ ಕವನ, ಒಲವಿನಾ ಕವನ
ಕನಸಿನಲ್ಲು ನೆನಸಲಿಲ್ಲ
ಇಂತ ಒಂದು ದಿನ, ಇಂತ ಒಂದು ದಿನ

ಆ ಕರ್ಣನಂತೆ ನೀ ದಾನಿಯಾದೆ Lyrics

ಕರ್ಣ (1986) -
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯನ : ಕೆ.ಜೆ. ಯೇಸುದಾಸ್

ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...

ಕಸದಮ್ತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲ ಬಾಳಲಿ ಕಣ್ಣೇರು ತಂದರು
ಕಸದಮ್ತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲ ಬಾಳಲಿ ಕಣ್ಣೇರು ತಂದರು
ನಿನ್ನಂತರಂಗವ ಅವರೆಏನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು

ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...

ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೆ ಆಡೊದು ದೇವರು
ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೆ ಆಡೋದು ದೇವರು
ಇಂದಲ್ಲ ನಾಳೆ ಸಾಯೋದೆ ಎಲ್ಲರು
ಎನಾದರೆನೀಗ ನಿನ್ನನ್ನು ಮರೆಯರು

ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೊರಾಟದಲಿ ಸೊಲೆಂಬುದೆಲ್ಲುಂಟು

ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...

ಕರ್ನಾಟಕದ ಇತಿಹಾಸದಲಿ Lyrics

ಕೃಷ್ಣ ರುಕ್ಮಿಣಿ (1988) -

ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್.ಪಿ.ಬಿ

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ

ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು

ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನ್ನು ಎಲ್ಲು ಚೆಲ್ಲಿ
ವಿಜಯದ ಕಹಳೆಯ ಊದಿದರು
ವಿಜಯನಗರ ಸ್ಥಾಪನೆ ಮಾಡಿದರು

ಕರ್ನಾಟಕದ ....

ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ
ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ

ಕಲಿಗಳ ನಾಡು ಕಲಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ

ಕನ್ನಡ ಬಾವುಟ ಹಾರಿಸಿದ
ಮಧುರೆವರೆಗು ರಾಜ್ಯವ ಅರಳಿಸಿದ
ಕರ್ನಾಟಕದ ಇತಿಹಾಸದಲ್ಲಿ

ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ

ಭುವನೇಶ್ವರಿಯ ತವರೂರಿದೆ
ಯತಿಗಳ ದಾಸರ ನೆಲೆ ನಾಡಿಲ್ಲೆ
ಪಾವನ ಮಣ್ಣಿದು ಹಂಪೆಯದು
ಯುಗ ಯುಗ ಅಳಿಯದ ಕೀರ್ತಿ ಇದು

ಕನ್ನಡ ಭೂಮಿ ಕನ್ನಡ ನುಡಿಯು
ಕನ್ನಡ ಕೀರ್ತಿ ಎಂದೆಂದು ಬಾಳಲಿ

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ

ಮಾಣಿಕ್ಯ ವೀಣಾ ಮುಫಲಾಲಯಂತೀಂ Lyrics

ಕವಿರತ್ನ ಕಾಳಿದಾಸ (1983) -
ಸಾಹಿತ್ಯ: ಕಾಳಿದಾಸ
ಸಂಗೀತ: ಎಂ. ರಂಗರಾವ್
ಗಾಯನ: ಡಾ| ರಾಜ್‍ಕುಮಾರ್

ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಆಆ......
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
ಮನಸಾಸ್ಮರಾಮೀ

ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ....
ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ....
ಆ......
ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ
ನಮಸ್ತೇ.. ಜಗದೇಕಮಾತಹಾ..ಆ..

ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಆ.....
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...

ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ...

ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ
ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ...
ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ
ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ
ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ...

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
ವಾಯ್ವಗ್ನಿ ಕೋಟೀರ ಮಾಣಿಕ್ಯ
ಸಂಕೃಷ್ಟ ಬಾಲಾ ತಪೋತ್ತಾಮ
ಲಾಕ್ಷಾರ ಸಾರುಣ್ಯ
ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ..
ಪುರುಚಿನನವರತ್ನ ಪೀಠಸ್ತಿತೆ, ಸುಸ್ತಿತೇ
ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ
ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ...

ಸರ್ವಯಂತ್ರಾತ್ಮಿಕೆ
ಸರ್ವಮಂತ್ರಾತ್ಮಿಕೆ
ಸರ್ವತಂತ್ರಾತ್ಮಿಕೆ
ಸರ್ವಮುದ್ರಾತ್ಮಿಕೆ
ಸರ್ವಶಕ್ತ್ಯಾತ್ಮಿಕೆ
ಸರ್ವವರ್ಣಾತ್ಮಿಕೆ
ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ
ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ Lyrics

**************************
ಸಾಹಿತ್ಯ / ಸಂಗೀತ: ಹಂಸಲೇಖ
ಗಾಯಕರು: ಕೆ. ಜೆ. ಯೇಸುದಾಸ್, ಎಸ್. ಜಾನಕಿ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣ
ಆನಂದ ಪಡೆಯೋಣ
ಬನ್ನಿ ಪ್ರೇಮದ ಹಸ್ತ್ರ ಹೇಳೋಣ

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ಗಾಳಿ, ನೀರು , ಹೂವು, ಹಣ್ಣು, ಇರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?

ಬರುವುದು ಹೇಗೆ? ಇರುವುದು ಹೇಗೆ?
ತಿಳಿದಿದೆ ನಮಗೆ, ಆದರೆ ಕೊನೆಗೆ
ಹೋಗುವ ಘಳಿಗೆ ತಿಳಿಯದು ನಮಗೆ
ಒಗಟಿದು ಎಲ್ಲರಿಗೆ

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ರಾಗ ತಾಳ, ಹಾವ ಭಾವ ಸೇರದೆ ಹೋದರೇ
ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ

ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ

ಬದುಕಿನ ಜೊತೆಗೆ ಪ್ರೆಮದ ಬೆಸುಗೆ
ಇರುವುದು ಹೀಗೆ ಒಲವಿನ ತೆರೆಗೆ
ಪ್ರೀತಿಯ ಸವಿಗೆ ತೋರುವ ನಮಗೆ
ಪ್ರೇಮವು ವರತಾನೆ?

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

|| ಪ್ರೇಮಲೋಕದಿಂದ ||

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||

ಜೊತೆಯಾಗಿ ಹಿತವಾಗಿ, ಸೇರಿ ನಡೆವ, ಸೇರಿ ನುಡಿವಾ Lyrics

********************
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ. ಬಾಲಸುಬ್ರಮಣ್ಯಂ

[ಗಂಡು]
ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....

[ಹೆಣ್ಣು]
ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....

[ಗಂಡು]
ಆ ಬಾನ ನೆರಳಲ್ಲಿ, ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ, ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ
[ಹೆಣ್ಣು]
ಈ ಸಂಜೆ ರಂಗಲ್ಲಿ, ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ, ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ

[ಗಂಡು]ನೀನೆ ನನ್ನ ಪ್ರಾಣ, [ಹೆಣ್ಣು] ನಮ್ಮ ಪ್ರಣಯ ಮಧುರ ಗಾನ ||೨||

[ಹೆಣ್ಣು]ಜೊತೆಯಾಗಿ
[ಗಂಡು] ಹಿತವಾಗಿ
[ಹೆಣ್ಣು]ಸೇರಿ ನಡೆವ
[ಗಂಡು] ಸೇರಿ ನುಡಿವಾ

[ಹೆಣ್ಣು]
ಕನಸಲ್ಲಿ ಕಂಡಾಸೆ, ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ, ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ, ನನ್ನಾಣೆ ನಲ್ಲ
[ಗಂಡು]
ಹಗಲಲ್ಲಿ ಕಂಡಾಸೆ, ಇರುಳಲ್ಲಿ ಬಂದಾಸೆ
ಎಲ್ಲಾವೂ ಒಂದೇನೆ, ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ, ನಿನ್ನಾಣೆ ನಲ್ಲೆ

[ಗಂಡು] ಎಂದೂ ಹೀಗೆ ಇರುವ, [ಹೆಣ್ಣು] ನಾವೆಂದೂ ಹೀಗೆ ನಲಿವ ||೨||
[ಗಂಡು, ಹೆಣ್ಣು]ನಿನ್ನ ಬಿಡಲಾರೆ ನಾನೆಂದಿಗೂ

ಲಲ ಲಾ ಲಾ

[ಹೆಣ್ಣು]
ಜೊತೆಯಾಗಿ ಹಿತವಾಗಿ, ಸೇರಿ ನಡೆವ, ಸೇರಿ ನುಡಿವಾ ||೨||
[ಗಂಡು] ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
[ಹೆಣ್ಣು] ನನ್ನ ಉಸಿರಲ್ಲಿ ನೀ ಉಸಿರಾಗಿರು
[ಗಂಡು, ಹೆಣ್ಣು] ನಿನ್ನ ಬಿಡಲಾರೆ ನಾನೆಂದಿಗೂ....

************************

ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ Lyrics

ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜ್ ಕೋಟಿ
ಗಾಯನ: ಎಸ್. ಪಿ. ಬಾಲಸುಭ್ರಮಣ್ಯಂ

ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಓ ಚಿನ್ನ ಅಂದು ನೋಡಿದೆ ನಿನ್ನನು
ಓ ರನ್ನ ಸೆರೆ ಮಾಡಿದೆ ನನ್ನನು
ಅರಿಯದೆ ಹೇಗೊ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಯಾವುದೋ ಜನುಮಾಂತರ ಬಂಧನ,
ಬೆರೆಸಿತು ಅದು ನಮ್ಮನು ಆ ದಿನ
ಹೆಣ್ಣು: ತಾಳದು ಜೀವ ನೀ ನಿಮಿಷ ನೊಂದರು,
ಒಂದೆ ಒಂದು ಹನಿಯ ಕಣ್ಣೀರು ಬಂದರು,
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಮುದ್ದಿನ ಹುಡುಗ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಗಂಡು:ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಕನಸಲ್ಲಿ ಬಂದವನಾರೇ..ಮನಸಲ್ಲಿ ನಿಂದವನಾರೇ Lyrics

ಶೃತಿ ಸೇರಿದಾಗ (1987) -

ಸಾಹಿತ್ಯ : ಚಿ.ಉದಯಶಂಕರ
ಸಂಗೀತ : ಟಿ.ಜಿ.ಲಿಂಗಪ್ಪ
ಗಾಯನ : ಎಸ್.ಜಾನಕಿ
ರಾಗ : ಮಧುಬಂತಿ

ಆ.......ಆ.......
ಕನಸಲ್ಲಿ ಬಂದವನಾರೇ..ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ......{ಪಲ್ಲವಿ}

ಜಟೆಯಲ್ಲಿ ಗಂಗೆಯ ಧರಿಸಿರುವಾ
ಮುಡಿಯಲಿ ಚಂದ್ರನ ಮುಡಿದಿರುವಾ
ಶೂಲವು ಅವನಾ ಕರದಲ್ಲೀ..
ನಗುವಾ ಮೊಗವಾ ಕಂಡು ಸೋತೆ....{ಪಲ್ಲವಿ}

ಮಂಜಿನ ಗಿರಿಯಲಿ ಕಾಣಿಸಿದಾ
ಸೂರ್ಯನ ಕಾಂತಿಯ ನಾಚಿಸಿದಾ
ಪ್ರೇಮದಿ ನನ್ನಾ ಬಳಿ ಬಂದಾ
ಒಲಿದು ಬಂದೆ ಗಿರಿಜೆ ಎಂದ....{ಪಲ್ಲವಿ}

ವಂದನೆ ವಂದನೆ ಸಾವಿರ ವಂದನೆ Lyrics

ವಂದನೆ ವಂದನೆ
ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ || ೨

ನೀಲಾಂಬರದ ಬೆಳ್ದಿಂಗಳಲಿ
ತೇಲಾಡುತಿರೊ ಸೌಂದರ್ಯವು ನೀನೆ
ರಂಗೆರಿರುವ ಹೂದೋಟದಲಿ
ತೂಗಾಡುತಿರೊ ಮಂದಾರವು ನೀನೆ || ೨

ಮೋಹಾಂಗನೆ ನೀನು ಆ
ರಾಗಾಂಗ್ಕಿತ ನಾನು
ಓ ಶೋಭನೆ ನೀಲಾಂಜನೆ ಅಭಿವಂದನೆ

ವಂದನೆ ....

ಕಾರ್ತಿಕ ಸಿರಿ ದೇವಾಲಯದಿ
ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ
ನಲಿದಾಡುತಿರೊ ನೃತ್ಯಾಂಗನೆಯು ನೀನೆ || ೨

ಸಿರಿ ಯೌವ್ವನೆ ನೀನು ಆ
ಅಭಿಮಾನಿಯು ನಾನು
ಓ ಶೋಭನೆ ಪ್ರೇಮಾಂಗನೆ ಅಭಿವಂದನೆ

ವಂದನೆ ....