ಕರ್ಣ (1986) -
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯನ : ಕೆ.ಜೆ. ಯೇಸುದಾಸ್
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...
ಕಸದಮ್ತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲ ಬಾಳಲಿ ಕಣ್ಣೇರು ತಂದರು
ಕಸದಮ್ತೆ ಕಂಡರು ಮನೆಯಲ್ಲಿ ಎಲ್ಲರು
ದಿನವೆಲ್ಲ ಬಾಳಲಿ ಕಣ್ಣೇರು ತಂದರು
ನಿನ್ನಂತರಂಗವ ಅವರೆಏನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...
ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೆ ಆಡೊದು ದೇವರು
ಬಾಳೆಂಬ ಆಟದಿ ಚೆಂಡಂತೆ ಎಲ್ಲರು
ತನ್ನಾಸೆಯಂತೆಯೆ ಆಡೋದು ದೇವರು
ಇಂದಲ್ಲ ನಾಳೆ ಸಾಯೋದೆ ಎಲ್ಲರು
ಎನಾದರೆನೀಗ ನಿನ್ನನ್ನು ಮರೆಯರು
ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೊರಾಟದಲಿ ಸೊಲೆಂಬುದೆಲ್ಲುಂಟು
ಆ ಕರ್ಣನಂತೆ ನೀ ದಾನಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ...
No comments:
Post a Comment