ಚಿತ್ರ: ಅಮರಶಿಲ್ಪಿ ಜಕಣಾಚಾರಿ (೧೯೬೪/1964)
ಸಾಹಿತ್ಯ: ಚಿ.ಸದಾಶಿವಯ್ಯ
ಸಂಗೀತ: ಎಸ್.ರಾಜೇಶ್ವರ ರಾವ್
ಹಾಡಿದವರು: ಘಂಟಸಾಲ, ಪಿ.ಸುಶೀಲಾ
ಏನೋ ಎಂತೋ, ಜುಮ್ಮೆಂದಿತು ತನುವು, ಬೆಚ್ಚಿತು ಮನವು
ಏಕೋ ಕಾಣೆನು, ಎಂದೂ ಅರಿಯೆನು, ಇಂತ ಸವಿ ನೋವ
ಸುಖವಾಂತ ಅನುಭಾವ
ಏನೋ ಎಂತೋ, ಜುಮ್ಮೆಂದಿತು ತನುವು, ಬೆಚ್ಚಿತು ಮನವು
ಏಕೋ ಕಾಣೆನು, ಎಂದೂ ಅರಿಯೆನು, ಇಂತ ಸವಿ ನೋವ
ಸುಖವಾಂತ ಅನುಭಾವ
ಪ್ರಣಯ ಗಾಳಿ ಬೀಸೆ, ತೆರೆಯಿತು ಕಣ್ಣ ಮನದೊಳಾಸೆ
ಪ್ರಣಯ ಗಾಳಿ ಬೀಸೆ, ತೆರೆಯಿತು ಕಣ್ಣ ಮನದೊಳಾಸೆ
ನಿನ್ನ ಸೋಕಲು ಮೈ ಅರಳಿತು ಯೌವನವು ಸೂಸಿ
ಏನೋ ಎಂತೋ
ಕಣ್ಣು ಕಣ್ಣು ಕಲೆಯೆ, ಚಿನ್ನದ ಕನಸು ಮೂಡಿ ನಲಿಯೆ
ಕಣ್ಣು ಕಣ್ಣು ಕಲೆಯೆ, ಚಿನ್ನದ ಕನಸು ಮೂಡಿ ನಲಿಯೆ
ಹುಣ್ಣಿಮೆ ಚಂದ್ರನ ತಣ್ಣನೆ ಬೆಳಕಲಿ ಹಣ್ಣಾಯಿತು ಪ್ರೇಮ
ಏನೋ ಎಂತೋ
ಗಾನ ಭಾವ ನೀನೆ, ನನ್ನ ಪ್ರಾಣ ದೇವ ನೀನೆ
ಗಾನ ಭಾವ ನೀನೆ, ನನ್ನ ಪ್ರಾಣ ದೇವ ನೀನೆ
ನನ್ನ ರೂಪಿಸಿ ವೀಣೆ ಯಾಗಿಸಿ ವಾಸಿಸುವವ ನೀನೆ
ಏನೋ ಎಂತೋ
ನಗುತ ನಲಿದು ಬಾರೆ, ನನ್ನ ಭವ್ಯ ಭಾಗ್ಯ ತಾರೆ
ನಗುತ ನಲಿದು ಬಾರೆ, ನನ್ನ ಭವ್ಯ ಭಾಗ್ಯ ತಾರೆ
ನನ್ನ ಕಲೆಗೆ ನವ ಕಳೆಯನಿತ್ತ ಸೌಂದರ್ಯ ನಿಧಿಯ ತೋರೆ
ಏನೋ ಎಂತೋ, ಜುಮ್ಮೆಂದಿತು ತನುವು, ಬೆಚ್ಚಿತು ಮನವು
ಏಕೋ ಕಾಣೆನು, ಎಂದೂ ಅರಿಯೆನು, ಇಂತ ಸವಿ ನೋವ
ಸುಖವಾಂತ ಅನುಭಾವ
ಏನೋ ಎಂತೋ
No comments:
Post a Comment