ಚಿತ್ರ: ಸಮಯದ ಗೊಂಬೆ (೧೯೮೪/1984)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಂ.ರಂಗ ರಾವ್
ಹಾಡಿದವರು: ಡಾ.ರಾಜ್ಕುಮಾರ್, ಎಸ್.ಜಾನಕಿ
ಸಂಕೋಚವ ಬಿಡು, ಗೆಳತಿಯೆ
ನಿನ್ನಾಸೆಗಳೆಲ್ಲವನು, ಹೇಳು ನೀ ನನಗೆ
ಈಗಲೇ ಎಲ್ಲವ, ನನ್ನಾಣೆ ಪೂರೈಸುವೆ
ಹೆಣ್ಣಲ್ಲವೆ ನಾನು, ಗೆಳೆಯನೆ
ನೂರಾಸೆಯು ಇರದೇನು, ಹೇಳು ನೀ ನನಗೆ
ಮದುವೆಯ ಬಯಕೆಯು, ನನ್ನಲ್ಲಿ ಬರದೇನು
ಕಣ್ಣಲಿ ಹೀಗೇತಕೆ, ತೀರದ ಬಾಯಾರಿಕೆ
ಕೆನ್ನೆಯು ಕೆಂಪೇತಕೆ, ಚೆಂದುಟಿ ಮಿಂಚೇತಕೆ
ಹೇಳೆಯಾ ಹೆಣ್ಣೇ
ನನ್ನಾ ಕಣ್ತುಂಬ ತುಂಬಿ ಈ ರೂಪ
ಏನೋ ಆನಂದವು
ನನ್ನಾ ಕಣ್ತುಂಬ ತುಂಬಿ ಈ ರೂಪ
ಏನೋ ಆನಂದವು
ಎದೆಯನು ತುಂಬಲು, ಮೈಯೆಲ್ಲ ಹೂವಾಗಿದೆ
ಹೆಣ್ಣಲ್ಲವೆ ನಾನು, ಗೆಳೆಯನೆ
ನೂರಾಸೆಯು ಇರದೇನು, ಹೇಳು ನೀ ನನಗೆ
ಮದುವೆಯ ಬಯಕೆಯು, ನನ್ನಲ್ಲಿ ಬರದೇನು
ಸಂಜೆಯ ಈ ರಂಗಿಗೆ, ಹಕ್ಕಿಯ ಹಾರಾಟಕೆ
ತಣ್ಣನೆ ತಂಗಾಳಿಗೆ, ಹೂಗಳ ಈ ಕಂಪಿಗೆ
ಸೋತೆನು ನಾನು
ನಿನ್ನಾ ಈ ಸ್ನೇಹ ನಿನ್ನಾ ಈ ಮೋಹ
ತಂದಾ ಸಂತೋಷವು
ನಿನ್ನಾ ಈ ಸ್ನೇಹ ನಿನ್ನಾ ಈ ಮೋಹ
ತಂದಾ ಸಂತೋಷವು
ಜೊತೆಯಲೇ ಇರುವೆನು
ಒಂದಾಗಿ ಎಂದೆಂದಿಗೂ
ಸಂಕೋಚವ ಬಿಡು, ಗೆಳತಿಯೆ
ನಿನ್ನಾಸೆಗಳೆಲ್ಲವನು, ಹೇಳು ನೀ ನನಗೆ
ಈಗಲೇ ಎಲ್ಲವ, ನನ್ನಾಣೆ ಪೂರೈಸುವೆ
ಹೆಣ್ಣಲ್ಲವೆ ನಾನು, ಗೆಳೆಯನೆ
ನೂರಾಸೆಯು ಇರದೇನು, ಹೇಳು ನೀ ನನಗೆ
ಮದುವೆಯ ಬಯಕೆಯು, ನನ್ನಲ್ಲಿ ಬರದೇನು
No comments:
Post a Comment