ಚಿತ್ರ: ವೀರ ಸಂಕಲ್ಪ (೧೯೬೪/1964)
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಲ್.ಆರ್.ಈಶ್ವರಿ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಎಲೆ ಮರೆಯ ಹಣ್ಣಂತೆ ಹಾಯಾಗಿ
ರಸ ತುಂಬಿ ಕುಳಿತಿದ್ದೆ ತನಿಯಾಗಿ
ಎಲೆ ಮರೆಯ ಹಣ್ಣಂತೆ ಹಾಯಾಗಿ
ರಸ ತುಂಬಿ ಕುಳಿತಿದ್ದೆ ತನಿಯಾಗಿ
ಗಿಣಿಯಂತೆ ಇಣುಕಿ ಬಂದೆನ್ನ ಕೆಣಕಿ
ಹತ್ತಿದೆ ಮೋಹದ ಉರಿ ಬೆಂಕಿ
ಹತ್ತಿದೆ ಮೋಹದ ಉರಿ ಬೆಂಕಿ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ತಂಗಾಳಿ ಮೈಗೆ ಮುಳ್ಳಾಯ್ತು
ತಿಂಗಾಳ ಬೆಳಕು ಬಿಸಿಲಾಯ್ತು
ತಂಗಾಳಿ ಮೈಗೆ ಮುಳ್ಳಾಯ್ತು
ತಿಂಗಾಳ ಬೆಳಕು ಬಿಸಿಲಾಯ್ತು
ಹಗಲೆಲ್ಲ ನೆನಸಿ, ಇರುಳೆಲ್ಲ ಬಯಸಿ
ದಣಿದಾಯ್ತು ನಿನಗಾಗಿ ಕಾತರಿಸಿ
ದಣಿದಾಯ್ತು ನಿನಗಾಗಿ ಕಾತರಿಸಿ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
ಇಟ್ಟಾಯ್ತೊ ನಿನ ಮೇಲೆ ನನ ಪ್ರಾಣ
ಒಟ್ಟೀಗೆ ಇರುವ, ಒಟ್ಟಾಗೆ ಮಡಿವ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಕಟ್ಟಾಣೆ ಕೊಟ್ಟೆನ್ನ ಕೈಗೊಳ್ಳೊ
ಸಿಟ್ಯಾಕೊ ಸಿಡುಕ್ಯಾಕೊ ನನ ಜಾಣ
No comments:
Post a Comment