ಶೃತಿ ಸೇರಿದಾಗ (1987) -
ಸಾಹಿತ್ಯ : ಚಿ.ಉದಯಶಂಕರ
ಸಂಗೀತ : ಟಿ.ಜಿ.ಲಿಂಗಪ್ಪ
ಗಾಯನ : ಎಸ್.ಜಾನಕಿ
ರಾಗ : ಮಧುಬಂತಿ
ಆ.......ಆ.......
ಕನಸಲ್ಲಿ ಬಂದವನಾರೇ..ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ......{ಪಲ್ಲವಿ}
ಜಟೆಯಲ್ಲಿ ಗಂಗೆಯ ಧರಿಸಿರುವಾ
ಮುಡಿಯಲಿ ಚಂದ್ರನ ಮುಡಿದಿರುವಾ
ಶೂಲವು ಅವನಾ ಕರದಲ್ಲೀ..
ನಗುವಾ ಮೊಗವಾ ಕಂಡು ಸೋತೆ....{ಪಲ್ಲವಿ}
ಮಂಜಿನ ಗಿರಿಯಲಿ ಕಾಣಿಸಿದಾ
ಸೂರ್ಯನ ಕಾಂತಿಯ ನಾಚಿಸಿದಾ
ಪ್ರೇಮದಿ ನನ್ನಾ ಬಳಿ ಬಂದಾ
ಒಲಿದು ಬಂದೆ ಗಿರಿಜೆ ಎಂದ....{ಪಲ್ಲವಿ}
No comments:
Post a Comment