ಚಿತ್ರ: ನಂದ ಗೋಕುಲ (೧೯೭೨/1972)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಪಿ.ಬಿ.ಶ್ರೀನಿವಾಸ್
ನೀ ಜನಿಸಿದ ದಿನವೂ ಅಳುವೆ
ನೀ ಸಾಯುವ ದಿನವೂ ಅಳುವೆ
ಬಾಳುವ ಕೆಲವೇ ದಿನಗಳಲಿ
ನಗುವುದ ಕಲಿ ನೀ ಮನವೆ
ನೀ ಜನಿಸಿದ ದಿನವೂ ಅಳುವೆ
ಮೌನವೆಂಬುದು ಚಿನ್ನ
ಮಾತು ಎಂಬುದು ಮುತ್ತು
ಮೌನವೆಂಬುದು ಚಿನ್ನ
ಮಾತು ಎಂಬುದು ಮುತ್ತು
ಮಾತಿನ ಬೆಲೆಯ ತಿಳಿಯದೆ ಆಡಲು ಮಾತೇ ತರುವುದು ಮೃತ್ಯು
ನೀ ಜನಿಸಿದ ದಿನವೂ ಅಳುವೆ
ಹಗಲಿನ ಬೆನ್ನೇ ಇರುಳು
ಕಷ್ಟವು ಸೌಖ್ಯದ ನೆರಳು
ಹಗಲಿನ ಬೆನ್ನೇ ಇರುಳು
ಕಷ್ಟವು ಸೌಖ್ಯದ ನೆರಳು
ಒಂದರ ಹಿಂದೆ ಇನ್ನೊಂದೆಂಬ ಅರಿವೆ ಬಾಳಿನ ತಿರುಳು
ನೀ ಜನಿಸಿದ ದಿನವೂ ಅಳುವೆ
ವೈರದಿ ನೆಮ್ಮದಿ ಇಲ್ಲಾ
ಪ್ರೀತಿಗೆ ಮಣಿವದು ಎಲ್ಲಾ
ವೈರದಿ ನೆಮ್ಮದಿ ಇಲ್ಲಾ
ಪ್ರೀತಿಗೆ ಮಣಿವದು ಎಲ್ಲಾ
ಒಬ್ಬರ ನೋವಲಿ ಹರುಷವ ಕಾಣುವನೆಂದಿಗೂ ಮಾನವನಲ್ಲ
ನೀ ಜನಿಸಿದ ದಿನವೂ ಅಳುವೆ
ನೀ ಸಾಯುವ ದಿನವೂ ಅಳುವೆ
ಬಾಳುವ ಕೆಲವೇ ದಿನಗಳಲಿ
ನಗುವುದ ಕಲಿ ನೀ ಮನವೆ
No comments:
Post a Comment